Slide
Slide
Slide
previous arrow
next arrow

ಕಲಗದ್ದೆಯಲ್ಲಿ ಗಾಯತ್ರಿ ಮಹಾಸತ್ರ ಯಜ್ಞ: ಸಂಕಲ್ಪ ಪೂಜೆ ಸಂಪನ್ನ

300x250 AD

ಸಿದ್ದಾಪುರ: ಲೋಕ ಕಲ್ಯಾಣಾರ್ಥವಾಗಿ ಸಂಕಲ್ಪಿಸಲಾದ ಗಾಯತ್ರಿ ಮಹಾಸತ್ರ ಮಹಾನ್ ಸಂಕಲ್ಪ ಕಾರ್ಯಕ್ರಮಕ್ಕೆ ತಾಲೂಕಿನ ಕಲಗದ್ದೆಯ ಶ್ರೀನಾಟ್ಯ ವಿನಾಯಕ ದೇವಾಲಯದಲ್ಲಿ ಸಂಕಲ್ಪಿಸಲಾಯಿತು.
ಒಂದು ವರ್ಷಗಳ ಕಾಲ ನಿರಂತರ ಗಾಯತ್ರೀ ಯಜ್ಞ ನಡೆಸಲು ಸಂಕಲ್ಪ ಮಾಡಲಾಗಿದ್ದು, ಅಕ್ಟೋಬರ್ 30ರಿಂದ ಪ್ರಾರಂಭಗೊಂಡು 2024ರ ಅಕ್ಟೋಬರ್ 30ರ ತನಕ ನಿತ್ಯ ದೇವಾಲಯದಲ್ಲಿ ಯಜ್ಞ ನಡೆಯಲಿದೆ.

ಸೋಮವಾರ ಬೆಳಿಗ್ಗೆ ತುಲಾ ಲಗ್ನದಲ್ಲಿ ಈ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿದ್ದು ಪೂರ್ವಾಂಗ ಕಾರ್ಯಕ್ರಮಗಳು, ಪುಣ್ಯಾಹ, ಗಣ ಹವನ, ಅಗ್ನಿ ಜನನ ಇತ್ಯಾದಿ ಕಾರ್ಯಕ್ರಮಗಳು ನಡೆದವು. ಗೋಕರ್ಣ ಹಾಗೂ ಸ್ಥಳೀಯ ವೈದಿಕರು ಧಾರ್ಮಿಕ ಕಾರ್ಯಕ್ರಮಗಳನ್ನು ಆರಂಭಿಸಿದ್ದು, ಯಜಮಾನರಾಗಿ ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಸಂಕಲ್ಪ ಮಾಡಿದರು.

300x250 AD

ಜಿ.ಡಿ.ಭಟ್ಟ ಕೆಕ್ಕಾರ್ ಅವರು ತಯಾರಿಸಿದ ಆಕರ್ಷಕ ಗಾಯತ್ರೀ ಮೂರ್ತಿ ಕೂಡ ವರ್ಷಗಳ ಪೂಜೆ ಆಗಲಿದ್ದು, ನಿತ್ಯ ಗಾಯತ್ರೀ ಹವನ ಕಲಗದ್ದೆಯಲ್ಲಿ ನಡೆಯಲಿದೆ. ಅಕ್ಟೋಬರ್ 31ರಂದು ಬೆಳಿಗ್ಗೆ ಸುಮಂಗಲಿಯರಿಂದ ಕುಂಕುಮಾರ್ಚನೆ, ಬೆಳಿಗ್ಗೆ 11ಕ್ಕೆ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಜಿಗಳ ಆಗಮನ, ಪಾದಪೂಜೆ ಹಾಗೂ ಶ್ರೀಗಳಿಂದ ಪೂರ್ಣಾಹುತಿ, ಆಶೀರ್ವಚನ ಕಾರ್ಯಕ್ರಮ ಕೂಡ ನಡೆಯಲಿದೆ.

Share This
300x250 AD
300x250 AD
300x250 AD
Back to top